ಒಂದು ದಿನ ಶ್ರೀನಾಥ ತನ್ನ ಫ್ರೆಂಡ್ ಗಿರೀಶನ ಪರಿಚಯ ಮಾಡಿಸಿದ. ಅವನ ತಂದೆ ನನ್ನ ತಂದೆಯ ಸಹೋದ್ಯೋಗಿಯಾಗಿದ್ದರೆಂದು ಅವನು ತಿಳಿಸಿದಾಗ ನನಗೆ ನನ್ನ ತಂದೆ ಸಿಕ್ಕಷ್ಟೇ ಸಂತಸವಾಗಿತ್ತು. ನಾನು ಶ್ರೀನಾಥನ ಬಳಿ ಗಿರೀಶನ ತಂದೆಯನ್ನು ಭೇಟಿಯಾಗೋಣ ಎಂದೆ . ಆದರೆ ಅವರಿಬ್ಬರು ಒಕ್ಕೊರಲಿನಲ್ಲಿ ಅವರು ಈಗ ಊರಲಿಲ್ಲ , ಬಂದ ಮೇಲೆ ಭೇಟಿಯಾಗೋಣ ಎಂದರು.
ಗಿರೀಶ ಹೇಳಿದ ಪ್ರಕಾರ , ಪ್ರೀತಿಸಿ ಮದುವೆಯಾಗಿದ್ದ ನನ್ನ ತಂದೆ ಮತ್ತು ತಾಯಿ ನಾನು ಹುಟ್ಟಿದ ಮೇಲೆ ಯಾವುದೋ ಭಿನ್ನಾಭಿಪ್ರಾಯದಿಂದ ಬೇರಾಗಿದ್ದರು. ಯಾವುದೋ ಹೆಂಗಸಿನ ಜೊತೆ ಅಪ್ಪನಿಗೆ ಸಂಭಂಧವಿತ್ತೆಂದು ಸುದ್ದಿಯಾಗಿತ್ತು. ಅಮ್ಮನಿಂದ ಡೈವೊರ್ಸ್ ಆದ ನಂತರ ಅಪ್ಪ ಗೋವಾಕ್ಕೆ ವರ್ಗ ಮಾಡಿಸಿಕೊಂಡು ಹೊರಟು ಹೋದರು. ಆಮೇಲೆ ಗಿರೀಶನ ತಂದೆಗೂ ಅವರ ಸಂಪರ್ಕವಿರಲಿಲ್ಲ .
ಕೇಳುತ್ತಿದ್ದ ನನಗೆ ಕತ್ತಲೆಯಲ್ಲಿರುವವರಿಗೆ ದೀಪ ಸಿಕ್ಕಂತಾಗಿತ್ತು. ಗೋವಾದಲ್ಲಿ ಅವರು ಕೆಲಸ ಮಾಡುತ್ತಿರುವ ಸಂಸ್ಥೆಗೆ ಹೋಗಿ ಸುಲಭವಾಗಿ ಅವರನ್ನು ಭೇಟಿ ಮಾಡಬಹುದೆಂದುಕೊಂಡೆ. ಶ್ರೀನಾಥ ನೀನೊಬ್ಬಳೇ ಅಷ್ಟು ದೂರದ ಊರಿಗೆ ಹೋಗುವುದು ಒಳ್ಳೆಯದಲ್ಲ ನಾನೂ ಬರುತ್ತೇನೆ ಎಂದ. ಬೇಸಗೆ ರಜೆ ಪ್ರಾರಂಭವಾಗಿತ್ತಿದ್ದಂತೆ ಹೋಗುವುದೆಂದು ತೀರ್ಮಾನಿಸಿದೆವು.
ಪರೀಕ್ಷೆ ಹತ್ತಿರ ಬರುತ್ತಿತ್ತು . ತುಂಬ ಚೆನ್ನಾಗಿ ಓದುತ್ತಿದ್ದ ನನ್ನ ಬಗ್ಗೆ ಟೀಚರ್ ಗಳಿಗೆ ಬಾರೀ ನಿರೀಕ್ಷೆಗಳಿದ್ದವು. ನಾನೂ ಚೆನ್ನಾಗೆ ತಯಾರಿ ನಡೆಸಿದ್ದೆ. ದಿನಕ್ಕೊಮ್ಮೆ ಶ್ರೀನಾಥನ ಭೆಟಿಯಾಗುತ್ತಿತ್ತು. ನಮ್ಮ ಸಲುಗೆ ಸಾಮಿಪ್ಯ ನೋಡಿದ ಅಮ್ಮನಿಗೆ ಕಸಿವಿಸಿಯಾಗಿ ರಾತ್ರಿ ಮಲಗಿದ್ದ ನನ್ನ ಬಳಿ ಬಂದು ತಲೆ ನೇವರಿಸುತ್ತ ಬುಧ್ಧಿವಾದ ಹೇಳಿದ್ದಳು . ಅವಳ ಪ್ರಕಾರ ಗಂಡು ಜಾತಿ ನಂಬುಗೆಗೆ ಅರ್ಹವಾಗಿರಲಿಲ್ಲ. ಆದರೆ ನಾನು ಅವನು ನನ್ನ ಒಳ್ಳೆಯ ಗೆಳೆಯನಷ್ಟೇ ಎಂದು ಅವಳ ಮಾತನ್ನು ತಳ್ಳಿಹಾಕಿದ್ದೆ. ಮಗಳ ಮೇಲೆ ತುಂಬ ನಂಬಿಕೆಯನ್ನಿಟ್ಟಿದ್ದ ಅವಳು ಸುಮ್ಮನಾಗಿದ್ದಳು.
ಅಮ್ಮನಲ್ಲಿ ನಿಜ ವಿಷಯ ತಿಳಿಸಿಬಿಡಬೇಕೆಂದು ಎಷ್ಟೋ ವೇಳೇ ಅನ್ನಿಸಿತ್ತು . ಆದರೆ ಅವಳೆಲ್ಲಿ ನೊಂದುಕೊಳ್ಳುತ್ತಾಳೊ , ಅಪ್ಪನ ವಿಷಯವೆತ್ತಬೇಡವೆಂದುಬಿಡುತ್ತಾಳೊ ಎಂದು ಸುಮ್ಮನಾಗಿಬಿಡುತ್ತಿದ್ದೆ.
ನಮ್ಮಿಬ್ಬರ ಪರೀಕ್ಷೆಗಳು ಮುಗಿದ ನಂತರ ಒಂದು ದಿನ ನಾವು ಗೋವಾಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಅಮ್ಮನ ಹತ್ತಿರ ಏನು ಹೇಳುವುದು? ಶ್ರೀನಾಥನೇ ಒಂದು ಉಪಾಯ ಸೂಚಿಸಿದ . ನನ್ನ ಫ್ರೆಂಡ್ ರೇಖಾಳಲ್ಲಿ ನಮ್ಮ ವಿಷಯವನ್ನೆಲ್ಲ ತಿಳಿಸಿದೆ. ನನ್ನ ನೋವಿನ ಅರಿವಿದ್ದ ಆವಳು ನನಗೆ ಸಹಾಯ ಮಾಡಲು ಒಪ್ಪಿದಳು. ಅವಳೊಂದಿಗೆ ಅವಳ ಅಜ್ಜಿಯ ಊರು ಮಂಗಳೂರಿಗೆ ಹೋಗುತ್ತೇನೆಂದು ಅಮ್ಮನನ್ನು ಒಪ್ಪಿಸಿದೆವು. ಅಮ್ಮನಲ್ಲಿ ಸುಳ್ಳು ಹೇಳುತ್ತಿದ್ದೇನಲ್ಲಾ ಎಂದು ದುಖಃವಾದರೂ ಅಪ್ಪನನ್ನು ಕಾಣುವ ತವಕದ ಕೈ ಮೇಲಾಗಿತ್ತು.
ಅಂದು ನಾನು ಶುಭದಿನವೆಂದುಕೊಂಡಿದ್ದ ಭಾನುವಾರ ಬೆಳಗಿನ ಬಸ್ಸಿಗೆ ನನ್ನನ್ನು ಕಳುಹಿಸಲು ಅಮ್ಮ ಬಂದಿದ್ದಳು. ನಾನು ಮತ್ತು ರೇಖ ಮಂಗಳೂರಿನ ಬಸ್ ಹತ್ತಿ ಕುಳಿತ ನಂತರ ಕನಿಷ್ಠ ಹತ್ತು ಬಾರಿ ಹುಷಾರಾಗಿ ಹೋಗಿ ಬಾ ಎಂದು ಹೇಳಿ ಮನೆಗೆ ಹೊರಟಳು . ಅಮ್ಮ ಮರೆಯಾದ ನಂತರ ಬಂದ ಶ್ರೀನಾಥನೊಡನೆ ನಾನು ಗೋವಾದ ಬಸ್ಸನ್ನೇರಿದೆ. ಬಸ್ಸಿನಲ್ಲಿದ್ದ ಶ್ರೀನಾಥ ನಾಲ್ವರು ಗೆಳೆಯರನ್ನು ನೋಡಿದಾಗ ಇವರೆಲ್ಲ ಯಾಕೆ ಬಂದರು ಎನಿಸಿದ್ದು ನಿಜ. ನನ್ನ ಅನುಮಾನ ಪರಿಹರಿಸಲೆಂಬಂತೆ , ಅವರೆಲ್ಲ ನಮಗೆ ಸಹಾಯ ಮಾಡಲು ಬಂದಿದ್ದಾರೆ , ಗೋವಾದ ಪರಿಚಯ ಇವರಿಗೆ ಚೆನ್ನಾಗಿದೆ ಅಲ್ಲದೆ ಈ ಅಜಯ್ ಫಾರ್ಮ್ ಹೌಸ್ ಗೋವಾದ ಬಳಿಯಲ್ಲಿದೆ ಎಂದ ಶ್ರೀನಾಥ. ಏನೋ ಒಂದು ರೀತಿಯ ಭಯವಾದರೂ ಶ್ರೀನಾಥನ ಮೇಲಿದ್ದ ವಿಶ್ವಾಸದಿಂದ ಸುಮ್ಮನೆ ಕುಳಿತೆ.
ಬಸ್ಸು ಗೋವಾ ತಲುಪಿದಾಗ ರಾತ್ರಿಯಾಗಿತ್ತು. ಹೋಟೆಲ್ ಒಂದರಲ್ಲಿ ಊಟ ಮುಗಿಸಿ ದ ಮೇಲೆ ಭೂತಬಂಗಲೆಯಂತಹ ತೋಟದ ಮನೆಯೊಂದಕ್ಕೆ ಕರೆತಂದರು. ನಿರ್ಮಾನುಷವಾಗಿದ್ದ ಆ ಮನೆಯ ಬಳಿ ಇದ್ದ ಕಾವಲುಗಾರನೊಬ್ಬ ಬಾಗಿಲು ತೆಗೆದು ವಿಚಿತ್ರ ನೋಟದಿಂದ ನನ್ನನ್ನು ನೋಡಿ ಹೊರಟುಹೋದ. ವಿಶಾಲವಾದ ಮನೆಯ ಮಹಡಿಯ ರೂಮಿಗೆ ಕರೆದೊಯ್ದ ಶ್ರೀನಾಥ ಇದು ನಿನ್ನ ರೂಮು . ನೀನು ಫ್ರೆಶ್ ಆಗಿ ಮಲಗು. ನಾವೆಲ್ಲ ಕೆಳಗಿನ ರೂಮಿನಲ್ಲಿರುತ್ತೇವೆ. ನಾಳೆ ಬೆಳಗ್ಗೆ ನಿನ್ನ ಅಪ್ಪನನ್ನು ನೋಡಲು ಹೋಗೋಣ ಎಂದು ಕೆನ್ನೆಹಿಂಡಿದ. ನನಗಾಗಿ ಇಷ್ಟೆಲ್ಲ ಮಾಡುತ್ತಿರುವ ಅವನ ಬಗ್ಗೆ ಅಭಿಮಾನ ಉಕ್ಕಿತ್ತು.
ತುಂಬ ದಿನಗಳ ತನ್ನ ಕನಸು ಈಡೇರಲಿದೆ , ಬೆಳಗ್ಗೆ ನಾನು ನನ್ನ ಅಪ್ಪನನ್ನು ನೋಡುತ್ತೇನೆಂಬ ಸಂಭ್ರಮದಲ್ಲಿ ತೇಲುತ್ತಾ ಮಲಗಿದ್ದ ನನ್ನ ಬಳಿ ಯಾರೋ ಬಂದಂತಾಯಿತು. ಗಾಭರಿಯಲ್ಲಿ ಯಾರು ಎಂದೆ , ನಾನೇ ಏಕೆ ಭಯ ಚಿನ್ನು ಎಂದ ಶ್ರೀನಾಥ ಏನೇನೋ ಮಾತನಾಡುತ್ತ ಹತ್ತಿರ ಬಂದು ದೇಹವನ್ನಾವರಿಸಿದ. ಅವನೇನು ಮಾಡುತ್ತಿದ್ದಾನೆಂಬ ಅರಿವಾದರೂ ನನ್ನವನೆಂಬ ಅಭಿಮಾನದಲ್ಲಿ ಸುಮ್ಮನುಳಿದೆ. ಸ್ವಲ್ಪ ಹೊತ್ತಿನ ಬಳಿಕ ಅವನೆದ್ದು ಹೋದ. ನೋವು , ಏನೋ ಕಳೆದುಕೊಂಡೆನೆಂಬ ಭಾವದಲ್ಲಿ ಅಳುತ್ತಿದ್ದಾಗ ಶ್ರೀನಾಥನ ಗೆಳೆಯ ಗಿರೀಶ ಒಳಬಂದು ಮೈ ಕೈ ಸವರಲಾರಂಭಿಸಿದ. ಸಿಟ್ಟಿನಿಂದ ಎದ್ದು ಕೆಳಗೋಡಿ ಬಂದೆ . ಅರಾಮವಾಗಿ ನಗುತ್ತ ಉಳಿದ ಗೆಳೆಯರೊಡನೆ ತನ್ನ ಅನುಭವಗಳನ್ನು ಹಂಚಿಕೊಳ್ಳುತ್ತಾ ಕುಡಿಯುತ್ತಾ ಕುಳಿತಿದ್ದ ಅವನನ್ನು ನೋಡಿದಾಗ ನಾನೆಂಥ ಅಪಾಯದಲ್ಲಿದ್ದೇನೆಂಬ ಅರಿವಾಗಿತ್ತು. ಹೊರಗೋಡಲು ಪ್ರಯತ್ನಿಸಿದೆ. ಆದರೆ ಎಲ್ಲರೂ ಸುತ್ತುವರಿದಿದ್ದರು. ಹತ್ತಿರದಲ್ಲಿದ್ದ ಕಂಚಿನ ಹೂದಾನಿಯಿಂದ ನನ್ನನ್ನು ಹಿಡಿಯಲು ಬಂದ ಶ್ರೀನಾಥನ ತಲೆಗೆ ಬಡಿದೆ. ರಕ್ತ ಸುರಿಸುತ್ತಾ ಕೆಳಗೆ ಬಿದ್ದ ಆತ ಸತ್ತೇ ಹೋದ . ಅವನು ಸತ್ತದ್ದನ್ನು ಕಂಡು ಹೆದರಿ ಉಳಿದವರೆಲ್ಲ ಓಡಿಹೋದರು. ಕೂಗಿದ ಶಬ್ದಕ್ಕೆ ಓಡಿ ಬಂದ ಕಾವಲುಗಾರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶ್ರೀನಾಥನನ್ನೂ , ನಡುಗುತ್ತಾ ನಿಂತಿದ್ದ ನನ್ನನ್ನೂ ನೋಡಿ ಪೋಲೀಸರನ್ನು ಕರೆಸಿದ.
ನಂತರ ಏನಾಯಿತೋ ನನಗೊಂದೂ ತಿಳಿಯದು . ನಾನು ಹೇಳಿದ್ದನ್ನಂತೂ ಯಾರೂ ನಂಬಲಿಲ್ಲ . ಶ್ರೀನಾಥನ ಗೆಳೆಯರು , ಕಾವಲುಗಾರ ಎಲ್ಲರೂ ಬರೀ ಸುಳ್ಳುಗಳ ಸರಮಾಲೆಯನ್ನೇ ಹೇಳಿದರು . ಕೊನೆಗೆ ನನ್ನ ಅಮ್ಮನೂ ಸಹ ನಾನು ಹೇಳಿದ್ದನ್ನು ನಂಬದೆ ಅಳುತ್ತ ಹೊರಟುಹೋದಳು.
ಈಗ ನಾನು ಈ ರಿಮ್ಯಾಂಡ್ ಹೋಂ ನಿವಾಸಿ . ಎಂದಾದರೊಮ್ಮೆ ನನ್ನ ಅಮ್ಮ ನನ್ನ ಅಪ್ಪನನ್ನು ಕರೆದುಕೊಂಡು ನನ್ನನ್ನು ನೋಡಲು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಹೇಳಿ ಬರಬಹುದಲ್ಲವೆ?
4 Dec 2009
1 Dec 2009
ಸೌಮ್ಯ - ಭಾಗ ೧
ನಾನು ಸೌಮ್ಯ. ವಯಸ್ಸು ೧೭ ವರ್ಷ. ನನ್ನ ವಾಸಸ್ಥಾನ ಬಾಲಾಪರಾಧಿಗಳನ್ನಿರಿಸುವ ರಿಮ್ಯಾಂಡ್ ಹೋಂ. ಇಲ್ಲಿನ ಗೇಟ್ ಸರಳುಗಳ ಬಳಿ ನಿಂತು ನಾನು ನನ್ನ ಅಪ್ಪ ಅಮ್ಮನಿಗಾಗಿ ಕಾಯುತ್ತಿದ್ದೇನೆ . ಎಂದಾದರೊಂದು ದಿನ ಅವರು ನನ್ನನ್ನು ನೋಡಲು ಬರುತ್ತಾರೆಂಬ ನಂಬಿಕೆ ನನಗಿದೆ.
ನಾನು ಇಲ್ಲಿಗೆ ಹೇಗೆ ಬಂದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆ ಎಂದು ಗೊತ್ತು. ಹೇಳುತ್ತೇನೆ , ನನ್ನ ಬಾಲ್ಯದಿಂದ ಈವರೆಗಿನ ಘಟನೆಗಳನ್ನು.
ಚಿಕ್ಕ ಮಗುವಾಗಿದ್ದಾಗ ನನ್ನ ಪ್ರಪಂಚದಲ್ಲಿದ್ದವಳು ನನ್ನ ಅಮ್ಮ ಮಾತ್ರ . ನನ್ನನ್ನು ಬೆನ್ನ ಮೇಲೆ ಕೂರಿಸಿಕೊಂಡು ಸವಾರಿ ಮಾಡುತ್ತಿದ್ದ ಅಮ್ಮನ ಚಿತ್ರಣ ಮಸುಕು ಮಸುಕಾಗಿ ಇನ್ನೂ ನನ್ನ ಕಣ್ಣಲ್ಲಿದೆ. ನರ್ಸರಿಗೆ ಹೋಗಲು ಪ್ರಾರಂಭಿಸಿದಾಗ ನನಗೆ ಪ್ರತಿಯೊಬ್ಬರಿಗೂ ತಂದೆ ಎಂಬ ವ್ಯಕ್ತಿ ಇರುತ್ತಾರೆಂಬ ವಿಷಯ ತಿಳಿಯಿತು .ಆಗೆಲ್ಲ ನನಗೆ ನನ್ನ ಅಪ್ಪ ಬೇಕು ಎಂದು ಅಮ್ಮನನ್ನು ಪೀಡಿಸುತ್ತಿದ್ದೆ. ಅಮ್ಮ ಎತ್ತಿಕೊಂಡು , ನಿನ್ನ ಅಪ್ಪ ದೂರದ ಊರಲ್ಲಿದ್ದಾರೆ ಸಲ್ಪ ದಿನಗಳಾದ ಮೇಲೆ ಬರುತ್ತಾರೆ ಪುಟ್ಟ ಎಂದು ಹೇಳುತ್ತಾ ಕೆನ್ನೆಗೆ ಮುತ್ತನ್ನಿಡುತ್ತಿದ್ದಳು . ಅವಳ ಪ್ರೀತಿಯ ನುಡಿಗಳಿಗೆ ಶಾಂತಳಾಗುತ್ತಿದ್ದ ನನಗೆ ಇನ್ನೊಮ್ಮೆ ನನ್ನ ಗೆಳತಿಯರು ವಿಷಯ ಎತ್ತುವ ವರೆಗೂ ಅಪ್ಪನ ನೆನಪೇ ಬರುತ್ತಿರಲಿಲ್ಲ. ಆದರೆ ಅಮ್ಮ ಹೇಳಿದ ಆ ಸ್ವಲ್ಪ ದಿನಗಳು ಮುಗಿಯಲೇ ಇಲ್ಲ . ನಾನು ಮಾತ್ರ ಬೆಳೆಯುತ್ತಿದ್ದೆ .
ಸ್ಕೂಲ್ ಸೇರಿದಾಗ ಮೊದಲ ದಿನ ಮಿಸ್ ಎಲ್ಲರಲ್ಲೂ ಅವರ ಅಪ್ಪ ಅಮ್ಮನ ಹೆಸರು ಕೇಳಿದರು. ನಾನು ಮಾತ್ರ ಅಮ್ಮನ ಹೆಸರೊಂದೆ ಹೇಳಿದೆ . ’ಅಪ್ಪನ ಹೆಸರೇನು ಮರಿ’ ಮಿಸ್ ಕೇಳಿದಾಗ ನಂಗೆ ಮರೆತುಹೋಗಿದೆ ಎಂದೆ. ಆಗ ಎಲ್ಲರೂ ನಕ್ಕ ನಗೆಯ ಶಬ್ದ ಇನ್ನೂ ನನ್ನ ಕಿವಿಗಳಲ್ಲಿದೆ.
ನನ್ನ ಗೆಳತಿಯರು ಅವರ ಅಪ್ಪನ ಬಗ್ಗೆ ಮಾತನಡಲು ಪ್ರಾರಂಭಿಸಿದರೆ ನಾನು ಮೌನವಾಗುಳಿಯುತ್ತಿದ್ದೆ . ಆಗೆಲ್ಲ ಅವರು ನನ್ನನ್ನು ನೊಡುತ್ತಿದ್ದ ರೀತಿಯನ್ನು ನಾನೆಂದೂ ಮರೆಯಲಾರೆ. ಪೇರೆಂಟ್ಸ್ ಡೇ ದಿನವಂತೂ ಅಮ್ಮನ ಹತ್ತಿರ ಅಪ್ಪನನ್ನು ಈಗಲೆ ಕರೆಸು ಅವರೆ ಸ್ಕೂಲಿಗೆ ಬರಲಿ ಎಂದು ಜಗಳವನ್ನೆ ಮಾಡುತ್ತಿದ್ದೆ. ಅಮ್ಮ ಏನೊ ಹೇಳಿ ಸಮಾಧಾನಪಡಿಸುತ್ತಿದ್ದಳು.
ಇನ್ನೂ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಅಮ್ಮ ನನಗೆ ಅಪ್ಪನ ಬಗ್ಗೆ ಸುಳ್ಳು ಹೇಳುತ್ತಿದ್ದಾಳೆ ಎನಿಸತೊಡಗಿತ್ತು. ಅಜ್ಜಿಯ ಬಳಿ ನಿಜ ಹೇಳುವಂತೆ ಪೀಡಿಸುತ್ತಿದ್ದೆ. ಅಜ್ಜಿ ಕಣ್ಣೀರಿಡುತ್ತ ಎಲ್ಲ ನನ್ನ ಕರ್ಮ ಎನ್ನುತ್ತಿದ್ದಳು. ನನ್ನ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕುತ್ತಿರಲಿಲ್ಲ.
ಅದೊಂದು ದಿನ , ನನ್ನ ಈಗಿನ ಸ್ಥಿತಿಗೆ ಕಾರಣೀಭೂತವಾದ ದಿನ , ನಾನಾಗ ಐದನೇ ತರಗತಿಯಲ್ಲಿದ್ದೆ. ಓದಿನಲ್ಲಿ ತುಂಬ ಚುರುಕು. ಕ್ಲಾಸಿಗೆ ಯಾವಾಗಲೂ ನಾನೇ ಫಸ್ಟ್. ಹೇಗಾದರೂ ತಾನು ಕ್ಲಾಸಿಗೆ ಫಸ್ಟ್ ಬರಬೇಕೆಂದು ಶೋಭ ಪ್ರಯತ್ನಿಸುತ್ತಿದ್ದಳು. ನನ್ನನ್ನು ಆಡಿಕೊಂಡು ನಗುವುದೆಂದರೆ ಅವಳಿಗೆ ತುಂಬ ಇಷ್ಟ. ಆ ದಿನ ಅವಳು ಮತ್ತು ಅವಳ ಗೆಳತಿಯರು ಏನೋ ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದರು. ನಾನೂ ಜಗಳವಾಡಿದೆ . ಅವಳು "ನನ್ನ ಅಪ್ಪನಲ್ಲಿ ಹೇಳಿಕೊಡುತ್ತೇನೆ ’ಎಂದು ಹೆದರಿಸಿದಳು. ನಾನೇನು ಕಡಿಮೆ? "ನಿನಗೊಬ್ಬಳಿಗೇನಾ ಅಪ್ಪ ಇರೋದು , ನಾನೂ ಅಪ್ಪನನ್ನು ಕರೆದುಕೊಂಡು ಬರುತ್ತೇನೆ ನೋಡು " ಎಂದೆ. ಅವರೆಲ್ಲ ಒಮ್ಮೆಲೆ ನಗತೊಡಗಿದರು. ಯಾಕ್ರೆ ನಗ್ತೀರ ಎಂದದ್ದಕ್ಕೆ "ನೀನು ನಿನ್ನ ಅಪ್ಪನನ್ನು ಹೇಗೆ ಕರೆದುಕೊಂಡು ಬರುತ್ತೀಯ? ಅವರು ನಿನ್ನಮ್ಮನಿಗೆ ಡೈವೋರ್ಸ್ ಕೊಟ್ಟಿದ್ದಾರೆ ಗೊತ್ತಾ? ಇನ್ಯಾವತ್ತು ಅವರು ಇಲ್ಲಿಗೆ ಬರಲ್ಲ ಅಂತ ನಿನ್ನೆ ನನ್ನಪ್ಪ ಹೇಳುತ್ತಿದ್ದರು"ಎಂದುಬಿಟ್ಟಳು ಶೋಭಾ. ನನಗೆ ಅದೇನೆಂದು ಸರಿಯಾಗಿ ಅರ್ಥವಾಗಲಿಲ್ಲ .
ಅಮ್ಮ ಆಫೀಸಿಂದ ಒಳಬರುತ್ತಿದ್ದಂತೆ "ಅಮ್ಮ ನೀನಿವತ್ತು ಅಪ್ಪನನ್ನು ಕರೆಸಲೇ ಬೇಕು . ಆ ಶೋಭ ಹೇಳುತ್ತಾಳೇ ಅವರು ನಿನಗೆ ಡೈವೋರ್ಸ್ ಕೊಟ್ಟಿದ್ದಾರೆ ಇನ್ಯವತ್ತೂ ಇಲ್ಲಿಗೆ ಬರಲ್ಲ ಅಂತ , ನಿಜವಾ ಅಮ್ಮ? ಅದೇನದು ನನಗೂ ತೋರಿಸು , ಅದನ್ನು ಕೊಟ್ಟರೆ ಅವರು ಇಲ್ಲಿಗೆ ಯಾಕೆ ಬರೊಲ್ಲಮ್ಮ?" ಎಂದು ಅಳುತ್ತಾ ಕೇಳಿದ ನನ್ನನ್ನು ಅಮ್ಮ ಗಟ್ಟಿಯಾಗಿ ತಬ್ಬಿಕೊಂಡು ತಾನೂ ಅಳತೊಡಗಿದಳು. "ನಿನಗೆ ಅಪ್ಪ ಅಮ್ಮ ಇಬ್ಬರೂ ನಾನೆ ಕಂದ . ದಯವಿಟ್ಟು ಇನ್ನು ಅಪ್ಪನ ಬಗ್ಗೆ ಕೇಳಬೇಡ . ಅವರಿಗೆ ನಾವು ಬೇಕಾಗಿಲ್ಲ ." ಅಳುತ್ತಲೆ ಹೇಳಿದ ಅಮ್ಮನನ್ನು ನೋಡಿ ಅವಳು ಅತ್ತದ್ದನ್ನೇ ನೋಡಿರದ ನಾನು , ಇನ್ನೆಂದೂ ಅವಳ ಬಳಿ ಅಪ್ಪನ ಬಗ್ಗೆ ಕೇಳಬಾರದೆಂದು ನಿರ್ಧರಿಸಿದ್ದೆ. ಆದರೆ ಅಪ್ಪನ ಹಂಬಲ ಮಾತ್ರ ಕಡಿಮೆಯಾಗಲಿಲ್ಲ . ನಾವೇಕೆ ಅವರಿಗೆ ಬೇಡವಾದೆವೆಂಬ ಹೊಸ ಕುತೂಹಲವೂ ಈಗ ಹುಟ್ಟಿಕೊಂಡಿತ್ತು. ಎಂದಾದರೊಂದು ದಿನ ಅಪ್ಪನನ್ನು ಕಂಡು ನನ್ನ ಪ್ರಶ್ನೆಗಳನ್ನಿಡಬೇಕು , ಸಾಧ್ಯವಾದರೆ ಅವರನ್ನು ಅಮ್ಮನ್ನೆದುರು ನಿಲ್ಲಿಸಿ ಅವಳನ್ನು ಸಂತೋಷಪಡಿಸಬೇಕೆಂದು ಅಂದೇ ನಿರ್ಧರಿಸಿದ್ದೆ.
ದಿನಗಳು ಉರುಳುತ್ತಿತ್ತು. ಕ್ರಮೇಣ ನಾನು ಗಟ್ಟಿಯಾಗಿದ್ದೆ, ’ ಅಪ್ಪ ಇಲ್ಲ ಅಮ್ಮನ ಮಗಳು’ ಇತ್ಯಾದಿ ಲೋಕದ ಟೀಕೆಗಳಿಗೆ ಕಿವುಡಾದೆ.
ನಾನಾಗ ಹೈಸ್ಕೂಲ್ ಕೊನೆ ವರ್ಷದಲ್ಲಿದ್ದೆ . ಯೌವ್ವನಕ್ಕೆ ಕಾಲಿರಿಸುತ್ತಿದ್ದುದರಿಂದ ಒಮ್ಮೆ ನೋಡಿದವರು ಇನ್ನೊಮ್ಮೆ ತಿರುಗಿ ನೋಡುವಷ್ಟು ಸುಂದರವಾಗಿದ್ದೆ. ದಿನಾ ಸ್ಕೂಲಿಗೆ ಹೋಗಿ ಬರುವಾಗ ಹತ್ತಾರು ಕಣ್ಗಳು ನನ್ನನ್ನೇ ಹಿಂಬಾಲಿಸುವುದರ ಅರಿವಾಗಿ ಹೆಮ್ಮೆಯೆನ್ನಿಸುತ್ತಿತ್ತು. ಹೀಗಿದ್ದಾಗಲೊಂದು ದಿನ ಪಕ್ಕದಲ್ಲಿದ್ದ ಖಾಲಿ ಮನೆಗೆ ಒಂದು ಪುಟ್ಟ ಸಂಸಾರ ಬಂದಿಳಿಯಿತು. ಗಂಡ , ಹೆಂಡತಿ , ನನ್ನದೇ ವಯಸ್ಸಿನ ಮಗಳು , ಕಾಲೇಜಿಗೆ ಹೋಗುತ್ತಿದ್ದ ಮಗ ಇರುವ ಆ ಸಂಸಾರವನ್ನು ನೋಡಿದಾಗ ನನಗೆ ಸಂತೋಷವಾಗುತ್ತಿತ್ತು . ನನಗಿರುವ ಕೊರತೆ ಮತ್ತಷ್ಟು ಕಾಡುತ್ತಿತ್ತು. ನನ್ನದೇ ವಯಸ್ಸಿನ ರೂಪ ಮತ್ತೆರಡು ದಿನದಲ್ಲೇ ನನ್ನ ಗೆಳತಿಯಾಗಿದ್ದಳು . ಅವಳ ಅಣ್ಣ ಶ್ರೀನಾಥನ ಪರಿಚಯವೂ ಅವಳ ಮೂಲಕ ಆಗಿತ್ತು. ನನ್ನನ್ನು ಕಂಡಾಗ ಮಿನುಗುವ ಅವನ ಕಣ್ಣುಗಳು ನನ್ನಲ್ಲಿ ಕನಸು ಮೂಡಿಸುತ್ತಿದ್ದವು.
ಸ್ವಲ್ಪ ದಿನಗಳಲ್ಲೇ ಅತ್ಮೀಯತೆಯಿಂದ ನನ್ನ ಮನಗೆದ್ದ ಶ್ರೀನಾಥನಲ್ಲಿ ನನ್ನೆಲ್ಲ ಕನಸುಗಳನ್ನು ಹಂಚಿಕೊಂಡಿದ್ದೆ. ನನ್ನ ಅಪ್ಪನನ್ನು ಕಾಣುವ ಬಯಕೆಯನ್ನೂ ಸಹಾ. ನನ್ನ ತಂದೆಯನ್ನು ಹೇಗಾದರೂ ಪತ್ತೆಹಚ್ಚಿ ಭೇಟೀ ಮಾಡಿಸುವೆನೆಂದು ಭರವಸೆಯಿತ್ತ ಅವನ ಮೇಲೆ ನನಗೂ ನಂಬಿಕೆ ಹುಟ್ಟಿತು. ಅವನ ಪ್ರೀತಿಯ ಮಾತುಗಳು ನನ್ನನ್ನು ಸುಂದರ ಲೋಕದಲ್ಲಿ ವಿಹರಿಸುವಂತೆ ಮಾಡುತ್ತಿತ್ತು.
....ಇನ್ನೂ ಇದೆ
ನಾನು ಇಲ್ಲಿಗೆ ಹೇಗೆ ಬಂದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆ ಎಂದು ಗೊತ್ತು. ಹೇಳುತ್ತೇನೆ , ನನ್ನ ಬಾಲ್ಯದಿಂದ ಈವರೆಗಿನ ಘಟನೆಗಳನ್ನು.
ಚಿಕ್ಕ ಮಗುವಾಗಿದ್ದಾಗ ನನ್ನ ಪ್ರಪಂಚದಲ್ಲಿದ್ದವಳು ನನ್ನ ಅಮ್ಮ ಮಾತ್ರ . ನನ್ನನ್ನು ಬೆನ್ನ ಮೇಲೆ ಕೂರಿಸಿಕೊಂಡು ಸವಾರಿ ಮಾಡುತ್ತಿದ್ದ ಅಮ್ಮನ ಚಿತ್ರಣ ಮಸುಕು ಮಸುಕಾಗಿ ಇನ್ನೂ ನನ್ನ ಕಣ್ಣಲ್ಲಿದೆ. ನರ್ಸರಿಗೆ ಹೋಗಲು ಪ್ರಾರಂಭಿಸಿದಾಗ ನನಗೆ ಪ್ರತಿಯೊಬ್ಬರಿಗೂ ತಂದೆ ಎಂಬ ವ್ಯಕ್ತಿ ಇರುತ್ತಾರೆಂಬ ವಿಷಯ ತಿಳಿಯಿತು .ಆಗೆಲ್ಲ ನನಗೆ ನನ್ನ ಅಪ್ಪ ಬೇಕು ಎಂದು ಅಮ್ಮನನ್ನು ಪೀಡಿಸುತ್ತಿದ್ದೆ. ಅಮ್ಮ ಎತ್ತಿಕೊಂಡು , ನಿನ್ನ ಅಪ್ಪ ದೂರದ ಊರಲ್ಲಿದ್ದಾರೆ ಸಲ್ಪ ದಿನಗಳಾದ ಮೇಲೆ ಬರುತ್ತಾರೆ ಪುಟ್ಟ ಎಂದು ಹೇಳುತ್ತಾ ಕೆನ್ನೆಗೆ ಮುತ್ತನ್ನಿಡುತ್ತಿದ್ದಳು . ಅವಳ ಪ್ರೀತಿಯ ನುಡಿಗಳಿಗೆ ಶಾಂತಳಾಗುತ್ತಿದ್ದ ನನಗೆ ಇನ್ನೊಮ್ಮೆ ನನ್ನ ಗೆಳತಿಯರು ವಿಷಯ ಎತ್ತುವ ವರೆಗೂ ಅಪ್ಪನ ನೆನಪೇ ಬರುತ್ತಿರಲಿಲ್ಲ. ಆದರೆ ಅಮ್ಮ ಹೇಳಿದ ಆ ಸ್ವಲ್ಪ ದಿನಗಳು ಮುಗಿಯಲೇ ಇಲ್ಲ . ನಾನು ಮಾತ್ರ ಬೆಳೆಯುತ್ತಿದ್ದೆ .
ಸ್ಕೂಲ್ ಸೇರಿದಾಗ ಮೊದಲ ದಿನ ಮಿಸ್ ಎಲ್ಲರಲ್ಲೂ ಅವರ ಅಪ್ಪ ಅಮ್ಮನ ಹೆಸರು ಕೇಳಿದರು. ನಾನು ಮಾತ್ರ ಅಮ್ಮನ ಹೆಸರೊಂದೆ ಹೇಳಿದೆ . ’ಅಪ್ಪನ ಹೆಸರೇನು ಮರಿ’ ಮಿಸ್ ಕೇಳಿದಾಗ ನಂಗೆ ಮರೆತುಹೋಗಿದೆ ಎಂದೆ. ಆಗ ಎಲ್ಲರೂ ನಕ್ಕ ನಗೆಯ ಶಬ್ದ ಇನ್ನೂ ನನ್ನ ಕಿವಿಗಳಲ್ಲಿದೆ.
ನನ್ನ ಗೆಳತಿಯರು ಅವರ ಅಪ್ಪನ ಬಗ್ಗೆ ಮಾತನಡಲು ಪ್ರಾರಂಭಿಸಿದರೆ ನಾನು ಮೌನವಾಗುಳಿಯುತ್ತಿದ್ದೆ . ಆಗೆಲ್ಲ ಅವರು ನನ್ನನ್ನು ನೊಡುತ್ತಿದ್ದ ರೀತಿಯನ್ನು ನಾನೆಂದೂ ಮರೆಯಲಾರೆ. ಪೇರೆಂಟ್ಸ್ ಡೇ ದಿನವಂತೂ ಅಮ್ಮನ ಹತ್ತಿರ ಅಪ್ಪನನ್ನು ಈಗಲೆ ಕರೆಸು ಅವರೆ ಸ್ಕೂಲಿಗೆ ಬರಲಿ ಎಂದು ಜಗಳವನ್ನೆ ಮಾಡುತ್ತಿದ್ದೆ. ಅಮ್ಮ ಏನೊ ಹೇಳಿ ಸಮಾಧಾನಪಡಿಸುತ್ತಿದ್ದಳು.
ಇನ್ನೂ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಅಮ್ಮ ನನಗೆ ಅಪ್ಪನ ಬಗ್ಗೆ ಸುಳ್ಳು ಹೇಳುತ್ತಿದ್ದಾಳೆ ಎನಿಸತೊಡಗಿತ್ತು. ಅಜ್ಜಿಯ ಬಳಿ ನಿಜ ಹೇಳುವಂತೆ ಪೀಡಿಸುತ್ತಿದ್ದೆ. ಅಜ್ಜಿ ಕಣ್ಣೀರಿಡುತ್ತ ಎಲ್ಲ ನನ್ನ ಕರ್ಮ ಎನ್ನುತ್ತಿದ್ದಳು. ನನ್ನ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕುತ್ತಿರಲಿಲ್ಲ.
ಅದೊಂದು ದಿನ , ನನ್ನ ಈಗಿನ ಸ್ಥಿತಿಗೆ ಕಾರಣೀಭೂತವಾದ ದಿನ , ನಾನಾಗ ಐದನೇ ತರಗತಿಯಲ್ಲಿದ್ದೆ. ಓದಿನಲ್ಲಿ ತುಂಬ ಚುರುಕು. ಕ್ಲಾಸಿಗೆ ಯಾವಾಗಲೂ ನಾನೇ ಫಸ್ಟ್. ಹೇಗಾದರೂ ತಾನು ಕ್ಲಾಸಿಗೆ ಫಸ್ಟ್ ಬರಬೇಕೆಂದು ಶೋಭ ಪ್ರಯತ್ನಿಸುತ್ತಿದ್ದಳು. ನನ್ನನ್ನು ಆಡಿಕೊಂಡು ನಗುವುದೆಂದರೆ ಅವಳಿಗೆ ತುಂಬ ಇಷ್ಟ. ಆ ದಿನ ಅವಳು ಮತ್ತು ಅವಳ ಗೆಳತಿಯರು ಏನೋ ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದರು. ನಾನೂ ಜಗಳವಾಡಿದೆ . ಅವಳು "ನನ್ನ ಅಪ್ಪನಲ್ಲಿ ಹೇಳಿಕೊಡುತ್ತೇನೆ ’ಎಂದು ಹೆದರಿಸಿದಳು. ನಾನೇನು ಕಡಿಮೆ? "ನಿನಗೊಬ್ಬಳಿಗೇನಾ ಅಪ್ಪ ಇರೋದು , ನಾನೂ ಅಪ್ಪನನ್ನು ಕರೆದುಕೊಂಡು ಬರುತ್ತೇನೆ ನೋಡು " ಎಂದೆ. ಅವರೆಲ್ಲ ಒಮ್ಮೆಲೆ ನಗತೊಡಗಿದರು. ಯಾಕ್ರೆ ನಗ್ತೀರ ಎಂದದ್ದಕ್ಕೆ "ನೀನು ನಿನ್ನ ಅಪ್ಪನನ್ನು ಹೇಗೆ ಕರೆದುಕೊಂಡು ಬರುತ್ತೀಯ? ಅವರು ನಿನ್ನಮ್ಮನಿಗೆ ಡೈವೋರ್ಸ್ ಕೊಟ್ಟಿದ್ದಾರೆ ಗೊತ್ತಾ? ಇನ್ಯಾವತ್ತು ಅವರು ಇಲ್ಲಿಗೆ ಬರಲ್ಲ ಅಂತ ನಿನ್ನೆ ನನ್ನಪ್ಪ ಹೇಳುತ್ತಿದ್ದರು"ಎಂದುಬಿಟ್ಟಳು ಶೋಭಾ. ನನಗೆ ಅದೇನೆಂದು ಸರಿಯಾಗಿ ಅರ್ಥವಾಗಲಿಲ್ಲ .
ಅಮ್ಮ ಆಫೀಸಿಂದ ಒಳಬರುತ್ತಿದ್ದಂತೆ "ಅಮ್ಮ ನೀನಿವತ್ತು ಅಪ್ಪನನ್ನು ಕರೆಸಲೇ ಬೇಕು . ಆ ಶೋಭ ಹೇಳುತ್ತಾಳೇ ಅವರು ನಿನಗೆ ಡೈವೋರ್ಸ್ ಕೊಟ್ಟಿದ್ದಾರೆ ಇನ್ಯವತ್ತೂ ಇಲ್ಲಿಗೆ ಬರಲ್ಲ ಅಂತ , ನಿಜವಾ ಅಮ್ಮ? ಅದೇನದು ನನಗೂ ತೋರಿಸು , ಅದನ್ನು ಕೊಟ್ಟರೆ ಅವರು ಇಲ್ಲಿಗೆ ಯಾಕೆ ಬರೊಲ್ಲಮ್ಮ?" ಎಂದು ಅಳುತ್ತಾ ಕೇಳಿದ ನನ್ನನ್ನು ಅಮ್ಮ ಗಟ್ಟಿಯಾಗಿ ತಬ್ಬಿಕೊಂಡು ತಾನೂ ಅಳತೊಡಗಿದಳು. "ನಿನಗೆ ಅಪ್ಪ ಅಮ್ಮ ಇಬ್ಬರೂ ನಾನೆ ಕಂದ . ದಯವಿಟ್ಟು ಇನ್ನು ಅಪ್ಪನ ಬಗ್ಗೆ ಕೇಳಬೇಡ . ಅವರಿಗೆ ನಾವು ಬೇಕಾಗಿಲ್ಲ ." ಅಳುತ್ತಲೆ ಹೇಳಿದ ಅಮ್ಮನನ್ನು ನೋಡಿ ಅವಳು ಅತ್ತದ್ದನ್ನೇ ನೋಡಿರದ ನಾನು , ಇನ್ನೆಂದೂ ಅವಳ ಬಳಿ ಅಪ್ಪನ ಬಗ್ಗೆ ಕೇಳಬಾರದೆಂದು ನಿರ್ಧರಿಸಿದ್ದೆ. ಆದರೆ ಅಪ್ಪನ ಹಂಬಲ ಮಾತ್ರ ಕಡಿಮೆಯಾಗಲಿಲ್ಲ . ನಾವೇಕೆ ಅವರಿಗೆ ಬೇಡವಾದೆವೆಂಬ ಹೊಸ ಕುತೂಹಲವೂ ಈಗ ಹುಟ್ಟಿಕೊಂಡಿತ್ತು. ಎಂದಾದರೊಂದು ದಿನ ಅಪ್ಪನನ್ನು ಕಂಡು ನನ್ನ ಪ್ರಶ್ನೆಗಳನ್ನಿಡಬೇಕು , ಸಾಧ್ಯವಾದರೆ ಅವರನ್ನು ಅಮ್ಮನ್ನೆದುರು ನಿಲ್ಲಿಸಿ ಅವಳನ್ನು ಸಂತೋಷಪಡಿಸಬೇಕೆಂದು ಅಂದೇ ನಿರ್ಧರಿಸಿದ್ದೆ.
ದಿನಗಳು ಉರುಳುತ್ತಿತ್ತು. ಕ್ರಮೇಣ ನಾನು ಗಟ್ಟಿಯಾಗಿದ್ದೆ, ’ ಅಪ್ಪ ಇಲ್ಲ ಅಮ್ಮನ ಮಗಳು’ ಇತ್ಯಾದಿ ಲೋಕದ ಟೀಕೆಗಳಿಗೆ ಕಿವುಡಾದೆ.
ನಾನಾಗ ಹೈಸ್ಕೂಲ್ ಕೊನೆ ವರ್ಷದಲ್ಲಿದ್ದೆ . ಯೌವ್ವನಕ್ಕೆ ಕಾಲಿರಿಸುತ್ತಿದ್ದುದರಿಂದ ಒಮ್ಮೆ ನೋಡಿದವರು ಇನ್ನೊಮ್ಮೆ ತಿರುಗಿ ನೋಡುವಷ್ಟು ಸುಂದರವಾಗಿದ್ದೆ. ದಿನಾ ಸ್ಕೂಲಿಗೆ ಹೋಗಿ ಬರುವಾಗ ಹತ್ತಾರು ಕಣ್ಗಳು ನನ್ನನ್ನೇ ಹಿಂಬಾಲಿಸುವುದರ ಅರಿವಾಗಿ ಹೆಮ್ಮೆಯೆನ್ನಿಸುತ್ತಿತ್ತು. ಹೀಗಿದ್ದಾಗಲೊಂದು ದಿನ ಪಕ್ಕದಲ್ಲಿದ್ದ ಖಾಲಿ ಮನೆಗೆ ಒಂದು ಪುಟ್ಟ ಸಂಸಾರ ಬಂದಿಳಿಯಿತು. ಗಂಡ , ಹೆಂಡತಿ , ನನ್ನದೇ ವಯಸ್ಸಿನ ಮಗಳು , ಕಾಲೇಜಿಗೆ ಹೋಗುತ್ತಿದ್ದ ಮಗ ಇರುವ ಆ ಸಂಸಾರವನ್ನು ನೋಡಿದಾಗ ನನಗೆ ಸಂತೋಷವಾಗುತ್ತಿತ್ತು . ನನಗಿರುವ ಕೊರತೆ ಮತ್ತಷ್ಟು ಕಾಡುತ್ತಿತ್ತು. ನನ್ನದೇ ವಯಸ್ಸಿನ ರೂಪ ಮತ್ತೆರಡು ದಿನದಲ್ಲೇ ನನ್ನ ಗೆಳತಿಯಾಗಿದ್ದಳು . ಅವಳ ಅಣ್ಣ ಶ್ರೀನಾಥನ ಪರಿಚಯವೂ ಅವಳ ಮೂಲಕ ಆಗಿತ್ತು. ನನ್ನನ್ನು ಕಂಡಾಗ ಮಿನುಗುವ ಅವನ ಕಣ್ಣುಗಳು ನನ್ನಲ್ಲಿ ಕನಸು ಮೂಡಿಸುತ್ತಿದ್ದವು.
ಸ್ವಲ್ಪ ದಿನಗಳಲ್ಲೇ ಅತ್ಮೀಯತೆಯಿಂದ ನನ್ನ ಮನಗೆದ್ದ ಶ್ರೀನಾಥನಲ್ಲಿ ನನ್ನೆಲ್ಲ ಕನಸುಗಳನ್ನು ಹಂಚಿಕೊಂಡಿದ್ದೆ. ನನ್ನ ಅಪ್ಪನನ್ನು ಕಾಣುವ ಬಯಕೆಯನ್ನೂ ಸಹಾ. ನನ್ನ ತಂದೆಯನ್ನು ಹೇಗಾದರೂ ಪತ್ತೆಹಚ್ಚಿ ಭೇಟೀ ಮಾಡಿಸುವೆನೆಂದು ಭರವಸೆಯಿತ್ತ ಅವನ ಮೇಲೆ ನನಗೂ ನಂಬಿಕೆ ಹುಟ್ಟಿತು. ಅವನ ಪ್ರೀತಿಯ ಮಾತುಗಳು ನನ್ನನ್ನು ಸುಂದರ ಲೋಕದಲ್ಲಿ ವಿಹರಿಸುವಂತೆ ಮಾಡುತ್ತಿತ್ತು.
....ಇನ್ನೂ ಇದೆ
Subscribe to:
Posts (Atom)